ವಿಶ್ವ
ಪರಿಸರ ದಿನಾಚರಣೆ ವರದಿ
ಪೈವಳಿಕೆನಗರ, ಜೂ.5 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕೇರಳ ರಾಜ್ಯ ಅರಣ್ಯ ಇಲಾಖೆ ಕೊಡಮಾಡಿದ ಸಸಿಗಳನ್ನು ಪಿಟಿಎ ಅದ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ವಿದ್ಯಾರ್ಥಿಗಳಿಗೆ ವಿತರಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್, ಪ್ರಾಂಶುಪಾಲರಾದ ಶ್ರೀ ಜೋರ್ಜ್ ಜೋಸೆಫ್, ಪಿಟಿಎ ಪದಾಧಿಕಾರಿಗಳಾದ ಅಹ್ಮದ್ ಹುಸೈನ್ ಪಿ.ಕೆ., ಕೃಷ್ಣ, ಇಬ್ರಾಹಿಂ, ರಾಧಾಕೃಷ್ಣ ಮಾಸ್ಟರ್, ಸುರೇಶ್ ಆಚಾರ್ಯ ಬಾಯಾರು, ಇಬ್ರಾಹಿಂ ಪಾವಲುಕೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪೋಸ್ಟರ್ ರಚನಾ ಸ್ಪರ್ಧೆ, ಪರಿಸರ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಯುಪಿ ವಿಭಾಗದಲ್ಲಿ 6ಸಿ ತರಗತಿಯ ಸಾತ್ವಿಕ್ ಪ್ರಥಮ, 7ಸಿ ತರಗತಿಯ ಧನುಷ್ ದ್ವಿತೀಯ, 7ಸಿ ತರಗತಿಯ ರಕ್ಷಣ್ ತೃತೀಯ ಸ್ಥಾನಗಳಿಸಿದರು. ಶಾಲಾ ಪರಿಸರ ಕ್ಲಬ್ ಸಂಚಾಲಕರಾದ ತಡತ್ತಿಲ್ ಸುನೀಶ್ ಕುಮಾರ್ ನೇತೃತ್ವ ನೀಡಿದರು.
No comments:
Post a Comment