BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಬೀಳ್ಕೊಡುಗೆ ಸಮಾರಂಭ

ಪೈವಳಿಕೆನಗರ, ಜೂ.18 : ಕೆಲವು ವರ್ಷಗಳಿಂದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿದ್ದು ಇದೀಗ ವರ್ಗಾವಣೆಗೊಳ್ಳುತ್ತಿರುವ ಕಛೇರಿ ನೌಕರರಾದ ಶ್ರೀ ಅಶೋಕ .ಬಿ.ಕೆ ಮತ್ತು ಬೇಬಿ ಆಳ್ವರಿಗೆ ಸ್ಟಾಫ್ ಕೌನ್ಸಿಲ್ ವತಿಯಿಂದ ಬೀಳ್ಕೊಡಲಾಯಿತು. 5ಬಿ ತರಗತಿಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕರಾದ ರವೀಂದ್ರನಾಥ್. ಕೆ. ಆರ್, ಅಬ್ದುಲ್ ಕರೀಂ.ಪಿ.ಕೆ, ಅಬ್ದುಲ್ ಲತೀಫ್, ಶ್ರೀಧರ ಭಟ್ ಮಾತನಾಡಿದರು. ಹಿರಿಯ ಶಿಕ್ಷಕರಾದ ರವೀಂದ್ರನಾಥ್. ಕೆ.ಆರ್ ಸ್ವಾಗತಿಸಿ ಸ್ಟಾಫ್ ಸೆಕ್ರೆಟರಿ ಶಶಿಕಲಾ ಟೀಚರ್ ವಂದಿಸಿದರು.

No comments:

Post a Comment