BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಪೈವಳಿಕೆನಗರ, .9 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಧಾಕೃಷ್ಣ ಮಾಸ್ತರ್ ಕಾಯರ್ ಕಟ್ಟೆ, ಶ್ರೀಮತಿ ಸರಿತಾ, ಶ್ರೀಮತಿ ರೋಹಿಣಿ, ಶ್ರೀ ಪದ್ಮನಾಭ, ಶ್ರೀ ಸುರೇಶ್ ಆಚಾರ್ಯ ಬಾಯಾರು, ಶ್ರೀ ಕೃಷ್ಣ ಪಿ, ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಅಹ್ಮದ್ ಹುಸೈನ್ ಮಾಸ್ತರ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ರೈನಾ ವಾರ್ಷಿಕ ವರದಿ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಶ್ರೀ ಲಾರೆನ್ಸ್ ಡಿಸೋಜಾ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಇಬ್ರಾಹೀಂ ಪಾವಲುಕೋಡಿ, ಸದಸ್ಯರಾಗಿ ಶ್ರೀ ಪದ್ಮನಾಭ ಬಾಯಿಕಟ್ಟೆ, ಶ್ರೀ ಮೂಸಾ ಕುಞ್ಞಿ, ಶ್ರೀ ಅಜಿತ್ ಪ್ರಸಾದ್, ಶ್ರೀ ರಾಧಾಕೃಷ್ಣ ಮಾಸ್ತರ್ ಕಾಯರ್ ಕಟ್ಟೆ, ಶ್ರೀ ಅಹ್ಮದ್ ಹುಸೈನ್ ಪಿ.ಕೆ, ಶ್ರೀ ಕೃಷ್ಣ ಪೈವಳಿಕೆ, ಶ್ರೀ ಮೂಸಾ ಫಿರ್ ದೋಸ್, ಶ್ರೀಮತಿ ಸರಸ್ವತಿ, ಶ್ರೀ ಇಬ್ರಾಹೀಂ ಪೈವಳಿಕೆ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ಶ್ರೀ ಇಬ್ರಾಹೀಂ ಮಾಸ್ಟರ್, ಶ್ರೀ ಉಮೇಶ್ ಚೇವಾರು ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಎಲಿಝಬೆತ್ ಸದಸ್ಯರಾಗಿ ಶ್ರೀಮತಿ ಮೈಮೂನಾ, ಶ್ರೀಮತಿ ರೋಹಿಣಿ, ಶ್ರೀಮತಿ ಜಯವಿಮಲ, ಶ್ರೀಮತಿ ಹೇಮಲತಾ ಆಯ್ಕೆಯಾದರು. ಗತ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ, ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಧನ್ಯವಾದವಿತ್ತರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಶ್ಮಿತಾ, ತನುಜಾ, ಅಕ್ಷತಾ, ಪ್ರಣೀತಾ ಪ್ರಾರ್ಥನೆ ಹಾಡಿದರು.

No comments:

Post a Comment