BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಸಮಾಜ ವಿಜ್ಞಾನ ರಸಪ್ರಶ್ನೆ ವಿಜೇತರು

ಉಪ್ಪಳ, .13 : ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಉಪ್ಪಳ ಬಿ.ಆರ್.ಸಿಯಲ್ಲಿ ಮಂಗಳವಾರ ನಡೆಯಿತು. ಯುಪಿ ವಿಭಾಗದ ಸ್ಪರ್ಧೆಯಲ್ಲಿ ಪೈವಳಿಕೆನಗರ ಶಾಲೆ ತೃತೀಯ ಸ್ಥಾನಗಳಿಸಿತು. 7ಎ ತರಗತಿಯ ಫಾತಿಮತ್ ಝೌರಾ ಮತ್ತು ಫಾತಿಮತ್ ರಿಹಾನಾ ಶಾಲೆಯನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಧರ್ಮತ್ತಡ್ಕ ಶಾಲೆ ಪ್ರಥಮ ಸ್ಥಾನಗಳಿಸಿದ್ದರೆ ಕಳಿಯೂರು ಶಾಲೆ ಮತ್ತು ಪೈವಳಿಕೆನಗರ ಶಾಲೆ ದ್ವಿತೀಯ ಸ್ಥಾನಗಳಿಸಿತ್ತು. ಆದರೆ ಟೈ ಬ್ರೇಕರಿನಲ್ಲಿ ಪೈವಳಿಕೆನಗರ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಜಯಗಳಿಸಿದ ಫಾತಿಮತ್ ರಿಹಾನಾ ಮತ್ತು ಫಾತಿಮತ್ ಝೌರಾ ಪೈನಗರ್ ವಿಷನ್ ಪ್ರತಿನಿಧಿಗಳಾಗಿದ್ದಾರೆ. ವಿಜೇತರನ್ನು ಶಾಲಾ ಪಿಟಿಎ ಅಭಿನಂದಿಸಿದೆ.(ಪೈನಗರ್ ವಿಷನ್ ವಿಜ್ಞಾನ ಮೇಳ ವರದಿ)

No comments:

Post a Comment