BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಓದುವಿಕೆ ಸಂಬಂಧ ವೃದ್ಧಿಸುತ್ತದೆ- ಅಡೂರು ಬಾಲಕೃಷ್ಣನ್

ಪೈವಳಿಕೆನಗರ: ಓದುವಿಕೆ ಸಂಬಂಧ ವೃದ್ಧಿಸುತ್ತದೆ. ನಮ್ಮ ಜ್ಞಾನ ಭಂಡಾರ ತುಂಬುತ್ತದೆ. ಆದರೆ ಅದು ವಾಚನ ಸಪ್ತಾಹಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಚಿತ್ರನಟ ಅಡೂರು ಬಾಲಕೃಷ್ಣನ್ ನುಡಿದರು. ಅವರು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ವಾಚನ ಸಪ್ತಾಹ ಸಮಾರೋಪ ಹಾಗೂ ವಿವಿಧ ಕ್ಲಬ್‍ಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ರವೀಂದ್ರನಾಥ್ ಕೆ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲಯಾಳ ವಿಭಾಗದ ಸಿಂಧುಜ ಶುಭಾಶಂಸನೆಗೈದರು. ಓದಿನ ಟಿಪ್ಪಣಿ ಸಂಗ್ರಹ ‘ಗರಿ’ಯನ್ನು ಅಡೂರು ಬಾಲಕೃಷ್ಣನ್ ಬಿಡುಗಡೆಗೊಳಿಸಿದರು. ಓದಿನ ಟಿಪ್ಪಣಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಝ್ಮಿ ಸ್ವಾಗತಿಸಿ ನಫೀಸತ್ ಸಲೀಮ ವಂದಿಸಿದರು. ನಿಶ್ಮಿತ ನಿರೂಪಿಸಿದರು. ವಿದ್ಯಾರಂಗದ ರೈನ ಇವೆಟ್ ಡಿಸೋಜ, ಶಶಿಕಲ ಕೆ, ಪ್ರವೀಣ್ ಕನಿಯಾಲ ನೇತೃತ್ವ ನೀಡಿದರು.

No comments:

Post a Comment