BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರದಲ್ಲಿ ಕೊಯ್ಲು ಉತ್ಸವ

ಪೈವಳಿಕೆನಗರ, .6: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕೃಷಿ ತೋಟದ ಕೊಯ್ಲು ಉತ್ಸವ ಜನವರಿ 6 ಬುಧವಾರ ಜರಗಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಟೀಚರ್ ಮೊದಲ ಬೆಳೆಯನ್ನು ವಿದ್ಯಾರ್ಥಿಗಳಿಗೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ತರಕಾರಿ ತೋಟದ ಉಸ್ತುವಾರಿಯ ಶ್ರೀ ಸುನೀಶ್ ಕುಮಾರ್ ತಡತ್ತಿಲ್ , ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ, ಆರೋಗ್ಯ ಕ್ಲಬ್ ನ ಶ್ರೀ ರವೀಂದ್ರನಾಥ್ ಕೆ.ಆರ್, ಸ್ಟಾಫ್ ಸೆಕ್ರೆಟರಿ ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು. ಕೃಷಿಗೆ ನೀರು ಉಣಿಸಿ ಬೆಳೆಸುವ ವಿದ್ಯಾರ್ಥಿಗಳಾದ ಲಕ್ಷ್ಮೀಶ, ರಕ್ಷಣ್, ಧನುಷ್, ವರದರಾಜ್, ಸುದೀಪ್ ಸಹಕರಿಸಿದರು.

No comments:

Post a Comment