BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕೈಯಾರಿನಲ್ಲಿ ನಡೆದ ಕಾಳುಮೆಣಸು ಕೃಷಿ ವಿಚಾರ ಸಂಕಿರಣ

ಕೈಯಾರು, ಸೆ. 3 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕೃಷಿ ಆಸಕ್ತ ವಿದ್ಯಾರ್ಥಿಗಳು ಗುರುವಾರ ಕೈಯಾರಿನಲ್ಲಿ ನಡೆದ ಕಾಳುಮೆಣಸು ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಪೈವಳಿಕೆನಗರ ಶಾಲೆಯ ವಿದ್ಯಾರ್ಥಿಗಳ ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾಳುಮೆಣಸಿನ ವಿವಿಧ ತಳಿಗಳು, ಬೆಳೆಯುವ ವಿಧಾನ ಮುಂತಾದವುಗಳ ಬಗೆಗೆ ಮಾಹಿತಿ ಪಡೆದರು. ನಂತರ ಕೃಷಿ ಸ್ಥಳಗಳ ಸಂದರ್ಶನ ನಡೆಸಿದರು.

No comments:

Post a Comment