BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿಯಾದ ಶ್ರೀಮತಿ ವಾರಿಜಾ ನೇರೋಳು
ಪೈವಳಿಕೆನಗರ, .7: ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿಗೊಂಡ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕಿ ಶ್ರೀಮತಿ ವಾರಿಜಾ ನೇರೋಳು ಅವರನ್ನು ಪೈವಳಿಕೆನಗರ ಶಾಲಾ ಉದ್ಯಾಗಿಗಳ ಸಂಘದ ವತಿಯಿಂದ ಬೀಳ್ಕೊಡಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. 1997ರಲ್ಲಿ ಪಾಂಡಿ ಶಾಲೆಯಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟ ಟೀಚರ್ 2000ದಲ್ಲಿ ಬೆಳ್ಳೂರು ಶಾಲೆಗೆ ವರ್ಗಾವಣೆಗೊಂಡರು. 2002ರಲ್ಲಿ ಕಾಯರ್ ಕಟ್ಟೆ ಶಾಲೆಗೆ ವರ್ಗಾವಣೆಯಾದ ಟೀಚರ್ 2013ರಿಂದ ಪೆರಡಾಲ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. 2015ರಲ್ಲಿ ಪೈವಳಿಕೆನಗರ ಶಾಲೆಗೆ ವರ್ಗಾವಣೆಗೊಂಡ ವಾರಿಜಾ ಟೀಚರ್ ಇದೀಗ ಬೆಳ್ಳೂರು ಹಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡಿದ್ದಾರೆ. ಸೌಮ್ಯ ಸ್ವಭಾವದ ವಾರಿಜಾ ಟೀಚರ್ ಎಲ್ಲರಲ್ಲೂ ಹೊಂದಿಕೊಳ್ಳುವ ಸ್ವಭಾವದೊಂದಿಗೆ ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದಾರೆ. ಹಿರಿಯ, ಕಿರಿಯರೊಂದಿಗೆ ಗೌರವಪೂರ್ವಕವಾಗಿ ಬೆರೆಯುವ ಟೀಚರ್ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ್ದಾರೆ. ಕೃಷ್ಣಮೂರ್ತಿ ಎಂ.ಎಸ್., ರವೀಂದ್ರನಾಥ.ಕೆ.ಆರ್, ಕುಮಾರಿ ವತ್ಸಲಾ, ರಜಿತಾ ಮಂಗಳೂರು, ಅಬ್ದುಲ್ ಲತೀಫ್ ಕೊಕ್ಕೆಚಾಲ್ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ, ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ವಂದಿಸಿದರು. 

No comments:

Post a Comment