ಉದ್ಯೋಗ
ಭಡ್ತಿಗೊಂಡ ಪೈವಳಿಕೆನಗರ ಶಾಲಾ
ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆ
ಪೈವಳಿಕೆನಗರ,
ಸೆ.4
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಮುಖ್ಯೋಪಾಧ್ಯಾಯರಾಗಿ ಸೇವೆ
ಸಲ್ಲಿಸಿ ಇದೀಗ ಕಾಸರಗೋಡು
ಜಿಲ್ಲಾ ಶಿಕ್ಷಣ ಉಪ ಯೋಜನಾಧಿಕಾರಿಯಾಗಿ
ಭಡ್ತಿಗೊಂಡ ಶ್ರೀನಿವಾಸ ಭಟ್
ಕಾಡೂರು ಇವರನ್ನು ಶಾಲಾ ಉದ್ಯೋಗಿಗಳ
ಸಂಘದ ವತಿಯಿಂದ ಶಾಲು ಹೊದೆಸಿ,
ಫಲ
ಪುಷ್ಪ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.
1985ರಲ್ಲಿ
ಕುಂಜತ್ತೂರು ಸರಕಾರಿ ಹಯರ್
ಸೆಕೆಂಡರಿ ಶಾಲೆಯಲ್ಲಿ
ಶಿಕ್ಷಕ ವೃತ್ತಿ ಆರಂಭಿಸಿದ
ಶ್ರೀಯುತರು 1987ರಲ್ಲಿ
ಬೇಕೂರು ಶಾಲೆಗೆ ವರ್ಗಾವಣೆಗೊಂಡರು.
ಅಲ್ಲಿ
8ವರ್ಷ
ಸೇವೆ ಸಲ್ಲಿಸಿ 1995ರಲ್ಲಿ
ಕಾಯರ್ ಕಟ್ಟೆ ಶಾಲೆಗೆ ವರ್ಗವಾದರು.
2009ರಲ್ಲಿ
ಅಡೂರು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ
ಸೇರ್ಪಡೆಗೊಂಡ ಶ್ರೀನಿವಾಸ ಭಟ್
ಅಡೂರು ಶಾಲೆಯ 80ವರ್ಷದ
ಇತಿಹಾಸದಲ್ಲಿ ಮೊದಲ ಬಾರಿಗೆ
ಉಪಜಿಲ್ಲಾ ಕಲೋತ್ಸವದ ನೇತೃತ್ವ
ವಹಿಸಿದರು.
2010 ಎಪ್ರಿಲ್
ತಿಂಗಳಲ್ಲಿ ಪೈವಳಿಕೆನಗರ
ಶಾಲೆಗೆ ವರ್ಗಾವಣೆಯಾದ ಶ್ರೀಯುತರು
ಸರಳ ಸಜ್ಜನ ವ್ಯಕ್ತಿ.
ಶಾಲಾ
ವಿದ್ಯಾರ್ಥಿಗಳ ಜತೆಗೆ ವಾತ್ಸಲ್ಯದಿಂದ
ಇರುವ ಶ್ರೀನಿವಾಸ
ಸರ್ ಶಿಕ್ಷಕರ ರಕ್ಷಕರ ಜತೆಗೆ
ಅತ್ಯುತ್ತಮ ಬಾಂಧವ್ಯವನ್ನು
ಹೊಂದಿದ್ದರು.
ಕೃಷಿಯ
ಬಗ್ಗೆ ಉತ್ತಮ ಒಲವನ್ನು ಹೊಂದಿದ
ಇವರು ತಮ್ಮ ವ್ಯಕ್ತಿತ್ವದಿಂದ
ಪೈವಳಿಕೆನಗರ ಶಾಲೆಯ ಹೆಸರನ್ನು
ಉನ್ನತ ಮಟ್ಟಕ್ಕೆ ಕೊಂಡೊಯ್ದು
ಊರ ಜನರ ಪ್ರೀತಿ ಗಳಿಸಿದವರು.
ಶಾಲಾ
ಸಭಾಂಗಣದಲ್ಲಿ ನಡೆದ
ಬೀಳ್ಕೊಡುಗೆ ಸಮಾರಂಭದಲ್ಲಿ
ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ,
ಜಿಲ್ಜೋ
ಸರ್,
ಸಂತೋಷ್
ಸರ್ ,
ಶ್ರೀಧರ
ಸರ್,
ರೈನಾ
ಟೀಚರ್,
ಸ್ವರ್ಣಲತಾ
ಟೀಚರ್,
ಅಹ್ಮದ್
ಹುಸೈನ್ ಮಾಸ್ಟರ್,
ಅಬ್ದುಲ್
ರಹಿಮಾನ್ ಪೈವಳಿಕೆ ಮಾತನಾಡಿದರು.
ಪ್ರಭಾರ
ಮುಖ್ಯೋಪಾಧ್ಯಾಯರಾದ ಶ್ರೀ
ರವೀಂದ್ರನಾಥ್ ಕೆ.ಆರ್.
ಸ್ವಾಗತಿಸಿ,
ಸ್ಟಾಫ್
ಸೆಕ್ರೆಟರಿ ಶಶಿಕಲಾ ಟೀಚರ್
ವಂದಿಸಿದರು.
ಎಸ್.ಆರ್.ಜಿ
ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್.
ನಿರೂಪಿಸಿದರು.
ಸುಮಿತ್ರಾ
ಟೀಚರ್ ಪ್ರಾರ್ಥನೆ ಹಾಡಿದರು.
പൈവളിഗെ
:
കാസറഗോഡ്
ജില്ലാ ആര്.എം.എസ്.എ
അസിസ്റന്റ പ്രോജക്റ് ഓഫീസരായി
സ്ഥാനകയറ്റ ലഭിച്ച പൈവളിഗെനഗര്
ഗവ.
ഹയര്
സെക്കന്ററി സ്കൂള് ഹെഡ്മാസ്റര്
ശ്രീനിവാസ സാരിന് പൈവളികെനഗര്
സ്കൂള് സ്റാഫ് കൗണ്സില്
യാത്രയയപ്പ് നല്കി.
പി.ടി.എ
പ്രസിഡന്റ ലാറന്സ് ഡിസൂസ
അധ്യക്ഷതയില് ചേര്ന്ന
യോഗത്തില് ശ്രീനിവാസ സാരിന്
പൊന്നാടയണിയിച്ച് ആദരിച്ചു.
ഫല
പുഷ്പങ്ങളും സ്മരണികയും
നല്കി.
പ്രിന്സിപ്പാള്
വിശ്വനാഥ കുംബള,
ശ്രീധര
ഭട്ട് ബീഡുബൈല്,
ജില്ജോ,
റൈനാ
ഇവെട് ഡിസൂസാ,
അഹ്മദ്
ഹുസൈന് പി.കെ,
സ്വര്ണലതാ,
അബ്ദുല്
രഹിമാന് പൈവളികെ,
സന്തോഷ്,
സംസാരിച്ചു.
ഹെഡ്
മാസ്റര് ഇന് ചാര്ജ്
രവീംദ്രനാഥ് കെ.ആര്
സ്വാഗതവും സ്റാഫ് സെക്രെട്ടറി
ശശികലാ ടീചര് നന്ദിയും
പരഞ്ഞു.
എസ്.
ആര്.ജി
കന്വിനര് അവതാരകനായി.
സുമിത്രാ
ടീചര് പ്രാര്ഥനം ചൊല്ലി.



No comments:
Post a Comment