BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಪೈವಳಿಕೆ ಪಂಚಾಯತ್ ಮಟ್ಟದ ಬಾಲ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆ

ಪೈವಳಿಕೆನಗರ, ಫೆ.10: ಕಾಸರಗೋಡು ಸರ್ವ ಶಿಕ್ಷಾ ಅಭಿಯಾನದ ಪ್ರಾಯೋಜಕತ್ವದಲ್ಲಿ, ಬಿ .ಆರ್.ಸಿ. ಮಂಜೇಶ್ವರದ ನೇತೃತ್ವದಲ್ಲಿ, ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸಮಿತಿಯ ಸಹಯೋಗದೊಂದಿಗೆ ಪೈವಳಿಕೆ ಪಂಚಾಯತ್ ಮಟ್ಟದ ವಿಜ್ಞಾನ ಸೆಮಿನಾರ್ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಪಂಚಾಯತ್ ಗ್ರಾಮ ವಿದ್ಯಾಬ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ದೇವು ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ.ಕೆ ಶ್ರೀನಿವಾಸರವರು ಅಧ್ಯಕ್ಷತೆ ವಹಿಸಿದ್ದರು., ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಕಾಯರ್ ಕಟ್ಟೆ ಸರಕಾರಿ ಎಲ್ ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚನಿಯಪ್ಪ ಶುಭಾಶಂಸನೆ ಮಾಡಿದರು. ಬಿ ಆರ್ ಸಿ ಟ್ರೈನರ್ ಜೋಯ್ ಸ್ಪರ್ಧೆಯ ಮಾಹಿತಿ ನೀಡಿದರು. ತೀರ್ಪುಗಾರರಾಗಿ ಸುಕೇಶ್ ಮೂಡಂಬೈಲ್, ನಿವೃತ್ತ ಮುಖ್ಯೋಪಾಧ್ಯಾಯರಾದ ನರಸಿಂಹ ಬಲ್ಲಾಳ್, ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿಯಾದ ಶ್ರೀ ರವೀಂದ್ರನಾಥ್ .ಕೆ.ಆರ್, ದೈಹಿಕ ಶಿಕ್ಷಕ ಶ್ರೀ ವಿಶ್ವನಾಥ ಅಮ್ಮೇರಿ ಮಾತನಾಡಿದರು. ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀಧರ ಭಟ್ ಸ್ವಾಗತಿಸಿ ಇಕೋ ಕ್ಲಬ್ ಸಂಚಾಲಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು. ಶಿಕ್ಷಕರಾದ ಶ್ರೀ ಪ್ರವೀಣ್ ಕನಿಯಾಲ ಕಾರ್ಯಕ್ರಮ ನಿರೂಪಿಸಿದರು.(ಪೈನಗರ್ ವಿಷನ್ ವಿಜ್ಞಾನ ಪ್ರತಿನಿಧಿ ವರದಿ)

No comments:

Post a Comment