BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ರಾಜ್ಯ ಮಟ್ಟದ ಪ್ರತಿಭೆಗಳಿಗೆ ಬಹುಮಾನ ವಿತರಣೆ
ಪೈವಳಿಕೆನಗರ, ಫೆ.1: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕೇರಳ ರಾಜ್ಯ ಮಟ್ಟದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಕೇರಳ ಶಾಲಾ ಕಲೋತ್ಸವದ ಹಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದ ಶ್ರದ್ಧಾ ಎನ್ ಅವರಿಗೆ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೋಟಿ.ಕೆ. ಪಾರಿತೋಷಕ ನೀಡಿ ಗೌರವಿಸಿದರು. ಕೇರಳ ರಾಜ್ಯ ವೃತ್ತಿಪರಿಚಯಮೇಳದಲ್ಲಿ ಹೈಸ್ಕೂಲ್ ವಿಭಾಗದ ಎಂಬ್ರಾಯಿಡರಿಯಲ್ಲಿ ಎ ಗ್ರೇಡ್ ಪಡೆದ ಹನ್ನತ್ ಬೀಬಿ ಅವರಿಗೆ ಹಸೀನಾ ಟೀಚರ್ ಪಾರಿತೋಷಕ ನೀಡಿ ಗೌರವಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ, ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ , ಪಿಟಿಎ ಅಧ್ಯಕ್ಷ ಶ್ರೀ ಲಾರೆನ್ಸ್ ಡಿಸೋಜಾ, ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ ನಾರಾಯಣ ರಾವ್ ನಿರ್ವಹಿಸಿದರು.

No comments:

Post a Comment